ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Thursday 25 April 2013

ಮೆರೆಯಬೇಡವೋ ಮನುಜ / Mereyabedavo Manuja

ಮೆರೆಯಬೇಡವೋ ಮನುಜ....
ಅಂತರಾಳದ ಅಂಕೆ ಮೀರಿ,
ಕೊಂಕು ಬೀರಿದೆ ಸುಂಕ ಕಾದಿದೆ...

ನೀತಿ ಮೀರದೆ, ನೀನು ಭ್ರಾಂತಿ ಕಾಣದೆ,
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ.
ಡಂಭಾಚಾರವು ಏಕೋ ಏಕೋ?
ತುಂಬಾ ತೋರಿಕೆ ಏಕೋ ಏಕೋ?
ಸಹಜವಾಗಿ ಬಾಳಿ ಬದುಕಯ್ಯ...
                                                         ಮೆರೆಯಬೇಡವೋ ಮನುಜ....

ಡೌಲು ತೋರದೆ, ಎಂದು ಕೇಡು ಹೊಂಚದೆ,
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ.
ಪೊಳ್ಳು ಜಂಭವು ಸಾಕೋ ಸಾಕೊ
ಸುಳ್ಳು ವಂಚನೆ ಸಾಕೋ ಸಾಕೊ
ಸ್ನೇಹದಿಂದ ಲೋಕ ನೋಡಯ್ಯ...
                                                         ಮೆರೆಯಬೇಡವೋ ಮನುಜ....


                                                                                        - ಪ್ರೊ. ದೊಡ್ಡರಂಗೇಗೌಡ

Download This Song




Thursday 18 April 2013

ಸಂಜೆಯಾಗುತಿದೆ.... / Sanjeyaagutide

ಸಂಜೆಯಾಗುತಿದೆ ನಡೆ ನಡೆ ಗೆಳೆಯಾ ಬೃಂದಾವನದ ಕಡೆ... 
ತಾಳೆಯ ಮರಗಳು ತಲೆಯ ತೂಗುತಿವೆ ಕೆದರುತ ಇರುಳ ಜಡೆ 
ಅಂಜಿಕೆಯಾಗುವ ಮುನ್ನವೇ ಸಾಗುವ ಬೃಂದಾವನದ ಕಡೆ... 

ದಟ್ಟಡವಿಯಲಿ ಪುಟ್ಟ ಪಾಲಕರೋ! ಕತ್ತಲು ಕವಿಯುತಿದೆ 
ಮಲ್ಲಿಗೆ ಬಣ್ಣದ ಹಸುಗಳಿಗೆಲ್ಲ ಕಪ್ಪನು ಬಳಿಯುತಿದೆ 
ಕೃಷ್ಣ ಕಪಿಲೆಯರು ಕಾಣುವುದಿಲ್ಲ ಅಂಜಿಕೆ ಬೆಳೆಯುತಿದೆ 
ಅಂಜದಿರೆನುವನು ನಂದಕುಮಾರ ಮುರುಳಿಯ ತುಟಿಗಿಡುತ 
ಅಭಯನಾದವನು ಬಯಲಲಿ ತುಂಬಿದ ಕೊಳಲಲುಸಿರು ಬಿಡುತ 
ಇರುಳ ಬಾನಿನಲಿ ತೇಲುತ ಬಂತು ಹುಣ್ಣಿಮೆ ಬೆಳ್ಳಿ ರಥ.. 

ಎಲ್ಲಿ ನೋಡಿದರು ಬೆಳದಿಂಗಳ ಮಳೆ ಮಿದುವಾಯಿತು ನೆಲವು 
ಹಾಲಿನ ಬಟ್ಟಲ ಎತ್ತಿ ಹಿಡಿಯುತಿದೆ ಕೋ ಎನ್ನುತ ಕೊಳವು 
ಬೆಣ್ಣೆಯ ಮೆತ್ತಿದ ತುಟಿಯನ್ನೋರೆಸುತಿದೆ ಆ ಯಮುನಾ ಜಲವು 
ಗೋಪ ಪಾಲಕರು ಕುಣಿಯುತಲಿಹರು ಕೊಳಲುಲಿ ಕೇಳುತ್ತಾ 
ಮರತ ಸಾಲುಗಳ ಒರತೆಯ ಬಗೆದು ಗೀತವ ಬಳುಕುತ್ತಾ*
ಹಸುಗಳ ಕೊರಳಿನ ಗಂಟೆಯಲೊದಿಸಿ ನಾದಕೆ ಸಿಲುಕುತ.... 
                                                              ತಾರಾ ಲೋಕವ ನಿಲುಕುತ್ತಾ... 


* ಹಾಡನ್ನು ಕೇಳಿ ಬರೆದುಕೊಂಡಿರುವುದು, ಈ ಒಂದು ಪದದ ಬಗೆಗೆ ಅನುಮಾನವಿದೆ