ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Wednesday 21 March 2012

ಅಳುವ ಕಡಲೊಳು ತೇಲಿ ಬರುತಲಿದೆ / Aluva kadalolu teli barutalide

ಅಳುವ ಕಡಲೊಳು ತೇಲಿ ಬರುತಲಿದೆ
      ನಗೆಯ ಹಾಯಿ ದೋಣಿ |
ಬಾಳ ಗಂಗೆಯ ಮಹಾ ಪೂರದೊಳು
      ಸಾವಿನೊಂದು ವೇಣಿ ||

ನೆರೆತಿದೆ ಬೆರೆತಿದೆ ಕುಣಿವ ಮೊರೆವ
      ತೆರೆ ತೆರೆಗಳೋಳಿಯಲ್ಲಿ |
ಜನನ ಮರಣಗಳ ಉಬ್ಬುತಗ್ಗು ಹೊರ
      ಳುರುಳುವಾಟವಲ್ಲಿ ||

ಆಶೆ ಬೂದಿ ತಳದಲ್ಲು ಕೆರಳುತಿವೆ
      ಕಡಿಗಳೆನಿತೋ ಮರಳಿ |
ಮುರಿದು ಬಿದ್ದ ಮನ ಮರದ ಕೊರಳು
      ಹೂವು ಅರಳಿ ಅರಳಿ  ||

ಆಶೆಯೆಂಬ ತಳವೊಡೆದ ದೋಣಿಯಲಿ
      ದೂರತೀರಯಾನ |
ಯಾರ ಲೀಲೆಗೋ ಯಾರೋ ಏನೋ ಗುರಿ
      ಯಿರದೆ ಬಿಟ್ಟ ಬಾಣ ||

ಇದು ಬಾಳು ನೋಡು ಇದ ತಿಳಿದೆನೆಂದರೂ
      ತಿಳಿದ ಧೀರನಿಲ್ಲಿ |
ಹಲವುತನದ ಮೈ ಮರೆಸುವಾತವಿದು
      ನಿಜವು ತೋರದಲ್ಲಿ ||

ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾ
      ವೇಕೊ ಮಲೆತು ಕಲೆತು
ಕೊನೆಗೆ ಕರಗುವೆವು ಮರಣ ತೀರ ಘನ
      ತಿಮಿರದಲ್ಲಿ ಬೆರೆತು ||

                                                         - ಎಂ.ಗೋಪಾಲ ಕೃಷ್ಣ ಅಡಿಗ  

14 comments:

  1. One of my fav from Adiga. Fantastic in Kalinga Rao voice.

    ReplyDelete
  2. ಅಳುವ ಕಡಲೊಳು ತೇಲಿ ಬರುತಲಿದೆ
    Aluva kadalolu teli barutalide

    ಅಳುವ ಕಡಲೊಳು ತೇಲಿ ಬರುತಲಿದೆ
    ನಗೆಯ ಹಾಯಿ ದೋಣಿ |
    ಬಾಳ ಗಂಗೆಯ ಮಹಾ ಪೂರದೊಳು
    ಸಾವಿನೊಂದು ವೇಣಿ ||

    ನೆರೆತಿದೆ ಬೆರೆತಿದೆ ಕುಣಿವ ಮೊರೆವ
    ತೆರೆ ತೆರೆಗಳೋಳಿಯಲ್ಲಿ |
    ಜನನ ಮರಣಗಳ ಉಬ್ಬುತಗ್ಗು ಹೊರ
    ಳುರುಳುವಾಟವಲ್ಲಿ ||

    ಆಶೆ ಬೂದಿ ತಳದಲ್ಲು ಕೆರಳುತಿವೆ
    ಕಡಿಗಳೆನಿತೋ ಮರಳಿ |
    ಮುರಿದು ಬಿದ್ದ ಮನ ಮರದ ಕೊರಳು
    ಹೂವು ಅರಳಿ ಅರಳಿ ||

    ಕೂಡಲಾರದೆದೆಯಾಳದಲ್ಲೂ
    ಕಂಡೀತು ಏಕಸೂತ್ರ |
    ಕಂಡುದುಂಟು ಬೆಸೆದೆದೆಗಳಲ್ಲು
    ಭಿನ್ನತೆಯ ವಿಕಟ ಹಾಸ್ಯ ||

    ಎತ್ತರೆತ್ತರೆಕೆ ಏರುವ ಮನಕೂ
    ಕೆಸರ ಲೇಪ, ಲೇಪ |
    ಕೊಳೆಯು ಕೊಳೆಚೆಯಲಿ ಮುಳುಗಿ ಕಂಡನೋ
    ಬಾನಿನೊಂದು ಪೆಂಪ ||

    ತುಂಬುಗತ್ತಲಿನ ಬಸಿರನಾಳುತಿದೆ
    ಒಂದು ಅಗ್ನಿ ಪಿಂಡ |
    ತಮದಗಾಧ ಹೊನಲಲ್ಲು ಹೊಳೆಯುತಿದೆ
    ಸತ್ವವೊಂದಖಂಡ ||

    ಆಶೆಯೆಂಬ ತಳವೊಡೆದ ದೋಣಿಯಲಿ
    ದೂರತೀರಯಾನ |
    ಯಾರ ಲೀಲೆಗೋ ಯಾರೋ ಏನೋ ಗುರಿ
    ಯಿರದೆ ಬಿಟ್ಟ ಬಾಣ ||

    ಇದು ಬಾಳು ನೋಡು ಇದ ತಿಳಿದೆನೆಂದರೂ
    ತಿಳಿದ ಧೀರನಿಲ್ಲ |
    ಹಲವುತನದ ಮೈ ಮರೆಸುವಾತವಿದು
    ನಿಜವು ತೋರದಲ್ಲ ||

    ಬೆಂಗಾರು ನೋಡು ಇದು ಕಾಂಬ ಬಯಲು
    ದೊರೆತಿಲ್ಲ ಆದಿ ಅಂತ್ಯ|
    ಇದ ಕುಡಿದೆನೆಂದ ಹಲರುಂಟು
    ತಣಿದೆನೆಂದವರ ಕಾಣಲಿಲ್ಲ||

    ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ
    ನಾವೇಕೊ ಮಲೆತು ಕಲೆತು
    ಕೊನೆಗೆ ಕರಗುವೆವು ಮರಣ ತೀರ ಘನ
    ತಿಮಿರದಲ್ಲಿ ಬೆರೆತು ||


    - ಎಂ.ಗೋಪಾಲ ಕೃಷ್ಣ ಅಡಿಗ

    ReplyDelete
    Replies
    1. Thanyou for the full lyrics :)

      Delete
    2. Thanyou for the full lyrics :)

      Delete
    3. ಕಿಡಿಗಳೆನಿತೊ ಮರಳಿ
      ಮನ ಮರದ ಕೊರಡೊಳು
      ಮೈಮರೆಸುವಾಟವಿದು
      ಬೆಂಗಾಡು ನೋಡು

      Delete
  3. "ಒಡೆದು ಬಿದ್ದ ಕೊಳಲು ನಾನು" ಈ ಕವಿತೆ ಇದ್ರೆ ದಯವಿಟ್ಟು ಕೊಡಿ ನಾನು ತುಂಬಾ ಹುಡುಕ್ತಾ ಇದ್ದೀನಿ

    ReplyDelete
  4. Thanks for this beautiful poem... It was my father's favourite song.. Especially sung by kalinga rao...

    ReplyDelete
  5. superb lyrics and great singing. What a voice. blessed are we.

    ReplyDelete
  6. Listen the song by Anitha Ananthaswamy, Sri Basavanandaswamy, P kalinga Rao, Shruthi Raghavendran, etc. Great song

    ReplyDelete
  7. There are some mistakes in the lyrics please correct them and upload

    ReplyDelete
  8. https://youtu.be/9ZNuFfQfKj8

    ReplyDelete
  9. No matter how many times I read the lines, sing it over and again I'm not feeling contented!! Every time I go through and listen to the song It takes me to a different world.❤️

    ReplyDelete
  10. ಎಷ್ಟು ಬಾರಿ ಕೇಳಿದರು ಬಯಕೆ ತೀರದು ಅಂತಹ ಸಾಲುಗಳು 😊🙏

    ReplyDelete